ಮುಂದುವರೆದ ಅಧ್ಯಾಯವು 2021 ರ ಕನ್ನಡ ಸಾಹಸ ಚಲನಚಿತ್ರವಾಗಿದ್ದು, ಬಾಲು ಚಂದ್ರಶೇಖರ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಕಣಜ ಎಂಟರ್‌ಪ್ರೈಸಸ್ ನಿರ್ಮಿಸಿದೆ. ಡೆಡ್ಲಿ ಆದಿತ್ಯ ಪೋಲೀಸ್‌ನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಜೈ ಜಗದೀಶ್, ಮುಖ್ಯಮಂತ್ರಿ ಚಂದ್ರು, ಆಶಿಕಾ ಸೋಮಶೇಖರ್ ಮತ್ತು ಇತರರು ತಾರಾಗಣದಲ್ಲಿದ್ದಾರೆ. ಜಾನಿ-ನಿತಿನ್ ಸಂಗೀತ ಸಂಯೋಜಿಸಿದ್ದು, ಅನೂಪ್ ಸೀಳಿನ್ ಹಿನ್ನೆಲೆ ಸಂಗೀತವನ್ನೂ ಮತ್ತು ದಿಲೀಪ್ ಚಕ್ರವರ್ತಿ ಛಾಯಾಗ್ರಹಣವನ್ನೂ ನಿರ್ವಹಿಸಿದ್ದಾರೆ. ಈ ಚಿತ್ರವು ಇಂಡಿಯಾ ಟುಡೆಯಿಂದ ಉತ್ತಮ ವಿಮರ್ಶೆಯನ್ನು ಪಡೆಯಿತು. == ಕಥಾವಸ್ತು == ಅನುಭವಿ ಪೋಲೀಸ್ ಬಾಲಾ ಅವರು ಗುತ್ತಿಗೆದಾರ ವಿಶ್ವಾಸ್ ನಾರಾಯಣ್ ಎಂಬ ಪ್ರಮುಖ ವ್ಯಕ್ತಿಯ ಕೊಲೆಯನ್ನು ತನಿಖೆ ಮಾಡುತ್ತಾರೆ. ಆರಂಭದಲ್ಲಿ ಪ್ರಕರಣಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ ಮತ್ತು ಎಲ್ಲಾ ಬೆರಳುಗಳು ಶಾಸಕ ಶಾಂತ್ ಶಂಕರ್ ಕಡೆಗೆ ತೋರಿಸಲ್ಪಟ್ಟಿವೆ. ಬಾಲಾ ಪ್ರಕರಣದ ವಿಚಾರಣೆಗೆ ಇಳಿದು ಅಂತಿಮವಾಗಿ ಕೊಲೆಗಾರನನ್ನು ಗುರುತಿಸುತ್ತಾನೆ ಆದರೆ ಪ್ರಕರಣವು ಹೆಚ್ಚು ಜಟಿಲವಾಗಿದೆ ಎಂದು ಅರಿತುಕೊಳ್ಳುತ್ತಾನೆ, ಅಂತಿಮವಾಗಿ ಈತನು ನಿಜವಾದ ಅಪರಾಧಿಯನ್ನು ಹಿಡಿಯುತ್ತಾನೆಯೇ? ಎಂಬುದು ಕುತೂಹಲಕರ. == ಪಾತ್ರವರ್ಗ == ಎಸಿಪಿ ಬಾಲನಾಗಿ ಡೆಡ್ಲಿ ಆದಿತ್ಯ ಮುಖ್ಯಮಂತ್ರಿ ಚಂದ್ರು ಗೃಹ ಸಚಿವ ಆಯುಕ್ತರಾಗಿ ಜೈ ಜಗದೀಶ್ ಗುತ್ತಿಗೆದಾರ ವಿಶ್ವಾಸ್ ನಾರಾಯಣ ಪಾತ್ರದಲ್ಲಿ ಭಾಸ್ಕರ್ ಶೆಟ್ಟಿ ನಟ ಚಿಂತನ್ ಪಾತ್ರದಲ್ಲಿ ಅಜಯ್ ರಾಜ್ ವಿನಯ್ ಕೃಷ್ಣಸ್ವಾಮಿ ಶಾಸಕ ಶಾಂತಾ ಶಂಕರ್ ಪತ್ರಕರ್ತೆ ಸಾಕ್ಷಿಯಾಗಿ ಆಶಿಕಾ ಸೋಮಶೇಖರ್ ಡಾಕ್ಟರ್ ಆಚಾರಿಯಾಗಿ ಚಂದನ ಗೌಡ ಕರ್ಣನಾಗಿ ಸಂದೀಪ್ ಕುಮಾರ್ ರಾಬರ್ಟ್ ಪಾತ್ರದಲ್ಲಿ ಶೋಭನ್ == ಚಿತ್ರಸಂಗೀತ == ಚಿತ್ರಗೀತೆಗಳ ಸಂಗೀತವನ್ನು ಜಾನಿ-ನಿತಿನ್ ಮತ್ತು ಚಿತ್ರದ ಹಿನ್ನೆಲೆ ಸಂಗೀತವನ್ನು ಅನೂಪ್ ಸೀಳಿನ್ ಸಂಯೋಜಿಸಿದ್ದಾರೆ . ಸಂಗೀತದ ಹಕ್ಕುಗಳನ್ನು ಆನಂದ್ ಆಡಿಯೋ ಪಡೆದುಕೊಂಡಿದೆ . == ಉಲ್ಲೇಖಗಳು ==